Monday 9 April 2012

ಬೇಡ ಬೇಡವೆ೦ದರೂ ಬೆನ್ನಟ್ಟಿ ಬರುತ್ತಲೇ ಇವೆ
ಎದೆಗೂಡಿನಲ್ಲಿ ಆಗಾಗ ಕಿಚ್ಚು ಹತ್ತಿಸುವ
ನಿನ್ನ ನೆನಪುಗಳು.

ಸಾಕು ಸಾಕೆ೦ದರೂ ಬಿಡುತ್ತಿಲ್ಲ, ಹಣಿಯುತ್ತಲೇ ಇವೆ
ಎನ್ನಾವೇಶಗಳ, ಬಾವೋದ್ವೇಗಗಳ ಸರಿಮಾಡುವ
ನಿನ್ನ ಧಮನಿಯ ಸದ್ದುಗಳು.

ಉಸಿರಿನ ಉಸಿರೆ೦ದರೂ ಒಪ್ಪುತ್ತಿಲ್ಲ, ನಿರಾಕರಿಸುತ್ತಲೆ ಇವೆ
ಒ೦ದೇ ಒ೦ದು ಬಾರಿ ನೀ ಕೊಟ್ಟ ಮೋಸದ ಪೆಟ್ಟಿಗೆ
ನರಳಿರುವ ನನ್ನೆಲ್ಲ ಭಾವನೆಗಳೂ.

ಕಣ್ಣಲಿ ಕಣ್ಣಿಟ್ಟು ನೋಡಿಕೊ೦ಡರೂ. ಕಾರಣವೂ
ಹೇಳದೇ ಹೊರಟು ಹೋದೆಯಲ್ಲೆ ಕಣ್ರೆಪ್ಪೆ
ಮಿಟುಕಿಸುವ ನಡು ಕ್ಷಣಗಳಲ್ಲೆ...

ಮೊಗೆ ಮೊಗೆದು ನಿನ್ನ ಬೊಗಸೆಗಳಲಿತ್ತ
ತು೦ಬು ಮನಸಿನ ಪ್ರೀತಿಯ ಒದ್ದುಕೊ೦ಡು
ಹೋದ ನೀ ನಿಜಕೂ ನಗುವಿನಲ್ಲಿ ನೊವನಡಗಿಸುವ
ಕಲೆ ಹೇಳಿಕೊಟ್ಟ ಕರುಣಾಮಯಿ !












Friday 6 April 2012

ಭೂಮಿ  ನಿನಗೊಂದು ಹನಿಗವನ
ತಿನ್ನಲು ಕಾಳೂ ಇಲ್ಲ, ಸೇರಲು ಗೂಡೂ ಇಲ್ಲ
ವಿರಮಿಸಲು ಆಸೆರೆಯಾಗಿದ್ದ ಮರವಿಂದು ಪಾಪ, ಬರೀ ಕೊರಡು !
ಬಾನೆತ್ತರಕೆ ಚಿಮ್ಮಿ ಹಾರುತ್ತಿದ್ದ ಹಲವು ಹಕ್ಕಿಗಳಲಿ ನಾನು ಒಂದು,
ರೆಕ್ಕೆಗಳಲಿ ಕಸುವೂ ಇಲ್ಲ ಇಂದು,
ಯಾತಕ್ಕೆ ಮಳೆ ಹೋದವೋ ಶಿವ ಶಿವ ಯಾತಕ್ಕೆ ಮಳೆ ಹೋದವೋ
ಬರದ ಬಿಸಿಗೆ ಧರಣಿ  ತಂಪು ಆಗುವುದು    ಹೇಗೋ ? 
ಹೌದು ಈಗೀಗ ಕಣೀರೂ ಬತ್ತಿಹೋಗಿದೆ!
ಕಾಡುತ್ತಿದ್ದ ನೆನೆಪೆಲ್ಲ ಕರಗಿ ಹೋಗುತ್ತಲೂ ಇವೆ!
ಕೊಟ್ಟ ಪ್ರೀತಿಯ ಅಲ್ಲೆ ಬಿಟ್ಟು ಹೊರಟು ಬ೦ದಿದ್ದರೂ!
ಅಲ್ಲಿದ್ದ ಅಷ್ಟೂ ನೋವ ಹೊತ್ತು ತ೦ದಿದ್ದರೂ!

ಬೇವು ಲೇಪಿಸಿದ ಸಿಹಿತಿನಿಸೊ ನಿನ್ನ ಬದುಕು...
ಹೇಗೆ ತಾನೆ ಸಹಿಸಿಕೊಳ್ಳಲಿ...?
ತ೦ತಾನೆ ಮೂಡಿದ ಸ೦ಭ೦ದವೊ೦ದು
ನಾನಾಗೆ ಹೇಗೆ ಮುರಿದು ಕೊಳ್ಳಲಿ ..?
ನಿನ್ನ ಅಷ್ಟೂ ಅವಘಡಗಳ ಅವಡುಗಚ್ಚಿ
ಇನ್ನೆಷ್ಟು ಮಧುರ ದಿನಗಳ ನಾ ಕಳೆದು ಕೊಳ್ಳಲಿ?

ನಿನ್ನನೆ ಉಸಿರಾಗಿಸಿಕೊ೦ಡು ನಾ ಮೈದು೦ಬಿಕೊ೦ಡ
ಕ್ಷಣಗಳಲಿ ನಿನ್ನಲ್ಲಿದ್ದ ನನ್ನಿಯ ಮಗ್ಗಲು ಬದಲಿಸುತ್ತಿದ್ದ!
ಬೇಕಿರಲಿಲ್ಲ ನನ್ನ ತು೦ಬು ಪ್ರೀತಿ,
ಹುಟ್ಟು ಹಬ್ಬ ನನ್ನದೊ ನಿನ್ನದೊ ಮತ್ಯಾರದೊ....
ಕೊಡುವ ಕಾಣಿಕೆಗಳಿಗೆ ನಾ ಕಟ್ಟುತ್ತಿದೆ ಕ೦ದಾಯ
ತಣಿಸ ಬೇಕಿತ್ತು ನಿನ್ನ ಅಮಲು, ಖರೀದಿಸುವ ತೆವಲು !
ಇದ್ಯಾವ ನೀತಿ? 

ನನ್ನೆಲ್ಲ ಆಸ್ತಿ, ಅ೦ತಸ್ತು, ಹಣ, ಚಿನ್ನ
ಧಾರೆಯೆರೆದ ನ೦ತರವೂ
ಇನ್ನಿಲ್ಲದ೦ತೆ ನಾ ಬಯಸಿದ್ದೇ ನಿನ್ನ,
ನೀನೆ ತರಬಲ್ಲ ಸೂಜಿ ಮಲ್ಲಿಗೆ ಹೂ !

ಇಳಿ ಸ೦ಜೆಗಳಲಿ ಒ೦ಟಿಯಾಗೆ ಕಾಡುದಾರಿಗಳಲಿ
ನನ್ನ ಒಮ್ಮೆ ಅಲ್ಲ ಹಲವಾರು ಬಾರಿ ನೀ ಕಾಯಿಸಿದ್ದೆ,
ಹಸಿ ಹಸಿಯಾಗಿ ಮನವ ನೀ ನೋಯಿಸಿದ್ದೆ!
ಉಮ್ಮಳಿಸುವ ದುಃಖವ ನು೦ಗಿ ಕೊ೦ಡು
ಜಾರಲಿರುವ ಕಣ್ಣೀರ ನಗುವಿನ ಮರೆಯಲ್ಲೆ ಒರೆಸಿಕೊ೦ಡು
ನಿನ್ನ ಕೈಗೆ ನಾನೆ ನನ್ನ ಕೈ ಬೆಸೆದುಕೊ೦ಡು ನಡೆಯುತ್ತಿದ್ದರೆ…….
ನಿನಗೋ... ಹೆಜ್ಜೆಗೊ೦ದು ಅನುಮಾನ!
"ಹೇಳು ಯಾರ ಸ೦ದಿಸಿದ್ದಕ್ಕೆ ಸ೦ತಸ?"
ಚೇಳು ಕುಟುಕಿನ೦ತಾ ಕೊ೦ಕು ಮಾತು !
ಮರೆಯಲಾದೀತೆ ಲೆಕ್ಕವೇ ಇಡದ ಅವಮಾನ !

ನೆನಪಿರಲಿ,
ಕಡಲು ಕೆರಳಿದರೆನೇ ಅಲೆ ಅಪ್ಪಲಿಸೋದು!
ಪ್ರೀತಿ ನರಳಿದರೇನೆ  ಕನಲಿ ನೀರಿಳಿಸೋದು!
ಹೆಂಡತಿ ಜಗಳವಾಡಿದರೆ ಅಡುಗೆ ಮಾಡದೆಯೇ ಮಲಗಿಬಿಡುತ್ತಾಳೆ...
ಹಾಳಾಗ್ ಹೋಗ್ಲಿ ನನಗೇನಂತೆ.... ಅಂತಾ...,
ಆದರೆ ಆಕೆ ಹಾಗಲ್ಲ ಅಡುಗೆ ಮಾಡಿಟ್ಟು ಮಲಗುತ್ತಾಳೆ
ತಿಂದ್ ಮಲಗಲಿ ತಡವಾದ್ರೆನಂತೆ... ಅ೦ತಾ !
ಹೌದು ಆಕೆನೇ
"ಅಮ್ಮ"

"
ಕಣ್ಣೊಳಗೆ ನಾ ಅರಳಿಸಿಕೊಂಡ
ಕನಸುಗಳು ಅಷ್ಟೂ ಕಮರಿಹೊಗುತಿವೆ
ನೀ ಕಟ್ಟಿಕೊಟ್ಟ ನೆನಪುಗಳ ಬುತ್ತಿ
ಬದುಕ ಹಾದಿಯಲ್ಲಿ ಬರಿದಾಗುತಿವೆ
ಬಂದುಬಿಡೆ ಗೆಳತಿ ಅಷ್ಟೂ ಬಂಧನಗಳ
... ಬಳ್ಳಿಗಳ ಬಿಡಿಸಿ ಕೊಂಡು...

ನನ್ನನ್ನೇ ಮಣ್ಣಲ್ಲಿಟ್ಟರೂ ಕರಗದೆ
ನಾ ನಿನ್ನಲ್ಲಿಟ್ಟ ಅನಂತ ಪ್ರೀತಿ,
ಅಂತಹುದರಲ್ಲಿ ಕಣ್ಣೋಟದಿಂದ
ಕ್ಷಣಕಾಲ ನೀ ಮರೆಯಾದರೆ
ಮರುಗದೇನೆ ನನ್ನೀ ಮನಸು ?

ಹೇಳಿಬಿಡಲಾ ಒಮ್ಮೆಲೇ ನಾ ಕಲ್ಪಿಸಿಕೊಂಡ
ನಮ್ಮ ಬಣ್ಣ ಬಣ್ಣದ ಬದುಕಿನ ಬಗ್ಗೆ?
ಕೇಳಿ ಬಿಡಲಾ ಈಗಲೇ ನಮಗುಟ್ಟುವ ಮಗುವಿಗೆ
ಇಡಲಿರುವ ಹೆಸರೇನೆಂದು ?

ನೀ ಹೇಳುವುದು ನಿಜಾ ಕಣೆ,
ದೇಹವಷ್ಟೇ ನನ್ನಲಿರುವುದು
ಮನಸೆಲ್ಲಾ ನಿನ್ನಲ್ಲೇ,
ಮೌನವಷ್ಟೇ ನನ್ನಲ್ಲಿ ಉಳಿದಿರುವುದು
ಮನದ ಭಾವವೆಲ್ಲ ನಿನ್ನಲ್ಲೇ !
ನೀನಲ್ಲದೆ ನನ್ನಲ್ಲಿನೆನಿದೆ?
"
ಬದುಕಿನ ಕುದುರೆಯ ಕಾಲು ಮುರಿದು ಹೋಗಿಬಿಟ್ಟೆದೆ!
ಮು೦ದೆ ಸಾಗಲು ಆಗದೆ ಸುಮ್ಮನೆ ಇರಲೂ ಆಗದೆ
ತಡವರಿಸಿ, ನೋವ ಸಹಿಸಿ ಸಹಿಸಿ ಕ೦ಗಾಲಾಗಿಬಿಟ್ಟೆದೆ,
ಯಾಕೊ... ಅದರ ಸಾಹೇಬನಿಗೂ ಗರ ಬಡಿದುಬಿಟ್ಟಿದೆ,
ಇತ್ತ ಗಮನವಿಡಲು ಆಗದಷ್ಟು !
ಇನ್ನು ಸರಿ ಪಡಿಸುವ ಮಾತಿಗೆ ಎಡೆ ಎಲ್ಲಿ?
...
ಹೌದು ನನ್ನದು ವಿದಿಯೆ ಖುದ್ದು ನಿ೦ತು ಮಾಡಿದ ಮಣ್ಣಿನ ಕುದುರೆ,
ಆದರೂ ಬಹಳ ಕನಸುಗಳ ಬಣ್ಣ ಬಳಿದು ಬಿಟ್ಟಿದ್ದ.
ಹಗಲಿರುಲೆನ್ನದೆ, ಬಿಸಿಲಲಿ, ಮಳೆಯಲಿ ಬೆವರ ಸುರಿಸಿ
ಓಡಿಸುತ್ತಲೇ ಇದ್ದೆ ಕ೦ಡ ಅಷ್ಟು ಕನಸುಗಳ
ನನಸು ಮಾಡಿಕೊಳ್ಳಲು...!
ಓಟದ ವೇಗದಲಿ, ಕನಸುಗಳ ಕಸಿ ಮಾಡುವ ಭರದಲಿ
ತಡವಿಕೂಡ ನೋಡಿಕೊಳ್ಳಲ್ಲಿಲ್ಲ ಬಣ್ಣ ಕಳೆದುಕೊ೦ಡ
ಮಾಸಲು ಬಣ್ಣದ ಕುದುರೆಯನ್ನ !

ಸವೆಸಿದ ಹಾದಿಯಲ್ಲಿ ಒಮ್ಮೆ ಈಗ ತಿರುಗಿನೋಡಿದರೆ
ಅಲ್ಲೇನಿದೆ? ಕರಗಿಹೋದ ರಸ್ತೆ, ಶವ ಸಾಗಿಸಿದ ಮನೆಯ
ಹೆಸರಿಡಲಾಗದ೦ತ ಮೌನ ! ಸಾದಿಸಿದ್ದಾದರು ಎನು?
ಮುಟಿಗೆಯಷ್ಟು ಹಣ ಮತ್ತು ಇನ್ನೊ೦ದು ರೇಜಿಗೆ ಅಣಿಯಾದ
ಮನಸಿನ ಹು೦ಬತನ ಬಿಟ್ಟರೆ !

ಕಳೆದುಕೊ೦ಡದು ಬಹಳವೆ ಇದೆ...
ಸುಮ್ಮನೆ ಹೇಳುತ್ತಾ ಹೊರಟರೆ!
ಯಾವುದರ ಬಗ್ಗೆ ಹೇಳಲಿ ಈಗ?
ಅಮ್ಮನ ಅಕ್ಕರೆ? ಅಪ್ಪನ ಅಪ್ಯಾಯತೆ?
ಅವಳ ನಿಸ್ವಾರ್ಥ ಪ್ರೇಮ?
ಕನಸಲೂ ಕನವರಿಸುವ ಆಪ್ತ ಮಿತ್ರರ ಸ್ನೇಹ?

ಸಾಕು ಸಾಹೇಬ ನಿನ್ನೀ ದಿವ್ಯ ಮೌನ!
ಬಾ.. ಬ೦ದು..ಕಾಲ ಜರುಗುವ ಮುನ್ನ
ಮುರಿದ ಕುದುರೆ ಕಾಲ ಉಳಿಸಿಬಿಡು..
ಅಡ್ಡಾ ದಿಡ್ಡೀ ಓಡುವ ಬದುಕಿಗೆ
ಸರಿ ಗಮ್ಯವ ನೀನೆ ತೋರಿಸೊ...
“ತುಮೀ ಬ೦ಧು, ತುಮೀ ಸಖ" ಎ೦ಬ
ಮಾತ ಸದಾ ನಿಜ ಎ೦ದೆನಿಸಿಯೂ ಬಿಡು!