Wednesday 1 February 2012

ಇದು ಕವನ ಅಲ್ಲಾ.....

 
ಎಷ್ಟ್ ಹೇಳಿದ್ರು ಕೇಳೋದಿಲ್ಲಾ ಹಾಳಾದ್ ಮನಸು... 
ಗುರುರಾಜ್ ಹೇಳ್ದಂಗೆ ಇದುರ್ದೂ ನಡೆದಿದ್ದೆ ದಾರಿ ! 
 
ಬೇಡ .. ಬೇಕಾಗಿಲ್ಲ ನಿನ್ನ ಪ್ರೀತಿ ಎಂದು ಮುನಿಸಿಕೊಂಡು
ಹೊಂಗೆ ಮರದ ನೆರಳಿಂದ ಹೋದವಳವಳು
ಮತ್ತೆ ಬರುವುದು ಬರೀ ಕನಸೇ..
ನೀ ಎಷ್ಟೇ ಕಾಡಿದರೂ ಬೇಡಿದರೂ ಬಾರಳು ಅಂದ್ರೆ...
"ಸುಮ್ಮನಿರು ..ನೀ ವಿವೇಕ...
ನಿನಗೆನೇನೂ ಗೊತ್ತೇ ಇಲ್ಲ ಅಂದುಕೊಂಡು!  
ಅವಳ್ ಹಂಗೆಲ್ಲ ಬಿಟ್ ಹೋಗೋವ್ಳಲ್ಲ , ನನ್ ಜೀವಾನೇ 
ಅವಳ್ ಕೈಲ್ ಮಡ್ಗಿದೀನಿ  ಮೋಸ ಮಾಡ್ತಾಳಾ ? 
ಅವ್ಳೇ ಮೋಸ ಮಾಡಿದ್ರೆ ಪ್ರಪಂಚದಲ್ ಇನ್ಯಾರ್ನ ನಂಬಲಿ? " ಅನ್ನುತ್ತೆ.. 
 
"ಒಂದುಗುಟ್ಟಿದ್ ಅಂತಮ್ದೀರ್, ಅಕ್ಕತಂಗೀರ್ , ನಬ್ಕಂಡಿದ್ ದೊಸ್ತಿಗಳೇ
ಕೈ  ಕೊಡೊ  ಕಾಲ್ದಾಗೆ  ಆ ಚೋಟುದ್ದದ ಹುಡುಗಿ ಮಾತೆನ್ ತಗೋ ... 
ವಲ್ಳೆದ್ ಯಾವ್ದು ಕೆಟ್ದು ಯಾವುದು ತಿಳ್ಕ ಅಮೇಲ್ ಪ್ರೀತಿ ಮಾಡ್ಲೇ...              
 
ಯಾವತ್ ತಾನೇ ಬುದ್ದಿಮಾತು ಕೇಳಿದೇ ಮನಸು ? "
ಹೆಂಗಾದ್ರೂ ಹಾಳಾಗ್ ಹೋಗ್ಲಿ ಬಿಡಿ...
 
ಆದ್ರೂನು ಆ ಸುಡುಗಾಡ್ ಪ್ರೀತಿಲಿ
ಅದೇನೈತೋ ಅದ್ಯಾಕ್ ಹಿಂಗೆ 
ಕೊಳ್ಳಿ ದೆವ್ವದ್ ತರ ಈ ಮನಸನ್ನ ಕುಣಿಸುತ್ತೋ
ಯಾವನಿಗ್ ಗೊತ್ತು ?
 
ಈ ಭಾವುಕತೆ ಮನಸಿಗ್ ಎಲ್ಲಿಂದ್ ಬಂತು!
ಅವುಳಗ್ಯಾಕೆ ಇವನ ಪ್ರೀತಿ ಗೊತ್ತಿಲ್ಲ ?
ಇವ್ನ್ಗ್ಯಾಕೆ ಅವುಳ್ ಮೋಸ ಗೊತಾಗಲ್ಲ?
ಸುಮ್ಮನ್ನಿದ್  ಮನಸಲ್ಲಿ ಕಲ್ಲಾಕಿದ್ಯಾಕೆ?
 
ಈ ಮನಸು ಒಡೆದು ಚೂರಾದ್ ಮೇಲೆ
" ನಿನ್ ಮಾತ್ ಕೇಳ್ಬೇಕಿತ್ತು ಕನ್ಲೇ ವಿವೇಕಾ" 
ಅಂಥಾ ಕೂಗ್ಕೊಳ್ಲೋದ್ಯಾಕೆ ? 
ಒಸಿ ನೀವಾರು ಹೇಳ್ರುರ್ಲಾ  .. !  

No comments:

Post a Comment