Friday 6 April 2012

ಬದುಕಿನ ಕುದುರೆಯ ಕಾಲು ಮುರಿದು ಹೋಗಿಬಿಟ್ಟೆದೆ!
ಮು೦ದೆ ಸಾಗಲು ಆಗದೆ ಸುಮ್ಮನೆ ಇರಲೂ ಆಗದೆ
ತಡವರಿಸಿ, ನೋವ ಸಹಿಸಿ ಸಹಿಸಿ ಕ೦ಗಾಲಾಗಿಬಿಟ್ಟೆದೆ,
ಯಾಕೊ... ಅದರ ಸಾಹೇಬನಿಗೂ ಗರ ಬಡಿದುಬಿಟ್ಟಿದೆ,
ಇತ್ತ ಗಮನವಿಡಲು ಆಗದಷ್ಟು !
ಇನ್ನು ಸರಿ ಪಡಿಸುವ ಮಾತಿಗೆ ಎಡೆ ಎಲ್ಲಿ?
...
ಹೌದು ನನ್ನದು ವಿದಿಯೆ ಖುದ್ದು ನಿ೦ತು ಮಾಡಿದ ಮಣ್ಣಿನ ಕುದುರೆ,
ಆದರೂ ಬಹಳ ಕನಸುಗಳ ಬಣ್ಣ ಬಳಿದು ಬಿಟ್ಟಿದ್ದ.
ಹಗಲಿರುಲೆನ್ನದೆ, ಬಿಸಿಲಲಿ, ಮಳೆಯಲಿ ಬೆವರ ಸುರಿಸಿ
ಓಡಿಸುತ್ತಲೇ ಇದ್ದೆ ಕ೦ಡ ಅಷ್ಟು ಕನಸುಗಳ
ನನಸು ಮಾಡಿಕೊಳ್ಳಲು...!
ಓಟದ ವೇಗದಲಿ, ಕನಸುಗಳ ಕಸಿ ಮಾಡುವ ಭರದಲಿ
ತಡವಿಕೂಡ ನೋಡಿಕೊಳ್ಳಲ್ಲಿಲ್ಲ ಬಣ್ಣ ಕಳೆದುಕೊ೦ಡ
ಮಾಸಲು ಬಣ್ಣದ ಕುದುರೆಯನ್ನ !

ಸವೆಸಿದ ಹಾದಿಯಲ್ಲಿ ಒಮ್ಮೆ ಈಗ ತಿರುಗಿನೋಡಿದರೆ
ಅಲ್ಲೇನಿದೆ? ಕರಗಿಹೋದ ರಸ್ತೆ, ಶವ ಸಾಗಿಸಿದ ಮನೆಯ
ಹೆಸರಿಡಲಾಗದ೦ತ ಮೌನ ! ಸಾದಿಸಿದ್ದಾದರು ಎನು?
ಮುಟಿಗೆಯಷ್ಟು ಹಣ ಮತ್ತು ಇನ್ನೊ೦ದು ರೇಜಿಗೆ ಅಣಿಯಾದ
ಮನಸಿನ ಹು೦ಬತನ ಬಿಟ್ಟರೆ !

ಕಳೆದುಕೊ೦ಡದು ಬಹಳವೆ ಇದೆ...
ಸುಮ್ಮನೆ ಹೇಳುತ್ತಾ ಹೊರಟರೆ!
ಯಾವುದರ ಬಗ್ಗೆ ಹೇಳಲಿ ಈಗ?
ಅಮ್ಮನ ಅಕ್ಕರೆ? ಅಪ್ಪನ ಅಪ್ಯಾಯತೆ?
ಅವಳ ನಿಸ್ವಾರ್ಥ ಪ್ರೇಮ?
ಕನಸಲೂ ಕನವರಿಸುವ ಆಪ್ತ ಮಿತ್ರರ ಸ್ನೇಹ?

ಸಾಕು ಸಾಹೇಬ ನಿನ್ನೀ ದಿವ್ಯ ಮೌನ!
ಬಾ.. ಬ೦ದು..ಕಾಲ ಜರುಗುವ ಮುನ್ನ
ಮುರಿದ ಕುದುರೆ ಕಾಲ ಉಳಿಸಿಬಿಡು..
ಅಡ್ಡಾ ದಿಡ್ಡೀ ಓಡುವ ಬದುಕಿಗೆ
ಸರಿ ಗಮ್ಯವ ನೀನೆ ತೋರಿಸೊ...
“ತುಮೀ ಬ೦ಧು, ತುಮೀ ಸಖ" ಎ೦ಬ
ಮಾತ ಸದಾ ನಿಜ ಎ೦ದೆನಿಸಿಯೂ ಬಿಡು!

No comments:

Post a Comment