ಭೂಮಿ ನಿನಗೊಂದು ಹನಿಗವನ
ತಿನ್ನಲು ಕಾಳೂ ಇಲ್ಲ, ಸೇರಲು ಗೂಡೂ ಇಲ್ಲ
ವಿರಮಿಸಲು ಆಸೆರೆಯಾಗಿದ್ದ ಈ ಮರವಿಂದು ಪಾಪ, ಬರೀ ಕೊರಡು !
ಬಾನೆತ್ತರಕೆ ಚಿಮ್ಮಿ ಹಾರುತ್ತಿದ್ದ ಹಲವು ಹಕ್ಕಿಗಳಲಿ ನಾನು ಒಂದು,
ರೆಕ್ಕೆಗಳಲಿ ಕಸುವೂ ಇಲ್ಲ ಇಂದು,
ಯಾತಕ್ಕೆ ಮಳೆ ಹೋದವೋ ಶಿವ ಶಿವ ಯಾತಕ್ಕೆ ಮಳೆ ಹೋದವೋ
ಈ ಬರದ ಬಿಸಿಗೆ ಧರಣಿ ತಂಪು ಆಗುವುದು ಹೇಗೋ ?
No comments:
Post a Comment